Friday, September 6, 2013

ಕೇಳು ಶ್ಯಾಮ.....


ಕೇಳು ಶ್ಯಾಮ ,

ಯಮುನೆಯಲೆಯ ಉಬ್ಬರಕೆ ರಾತ್ರಿಯೇ ಬೇಕು,
ನನ್ನ ಮನದ ತುಡಿತಕ್ಕೆ ನಿನ್ನ ನವಿಲುಗರಿ ಸಾಕು ...


ನಿನ್ನ ಮೋಹಕ  ಮೊದಲ ನೋಟಕ್ಕೆ ನಮ್ಮನೆಯಂಗಳದಿ ಹೂ ಬಳ್ಳಿ ಚಿಗುರಿದೆ
ಇನ್ನು ನನ್ನ ಗತಿ ಏನಿರಬಹುದು??



ಸಖಿಯರೆಲ್ಲರೂ ಕೇಳುವರು ..
ಸತಿ ನೀನು, ಮೋಹನನ ಮೇಲೇಕೆ ಈ ಪರಿಯ ಮೋಹ
ನಾಬಲ್ಲೆ ಇದು  ತೀರದ ದೈವಿಕ ದಾಹ!!



ಗೋಕುಲದ ಗರಿಕೆಯೂ ನಿನ್ನ ಹೆಸರ ನುಡಿವುದೆಂದೇಕೆ
ಈ ಪರಿಯ ಹೆಮ್ಮೆ ನನ್ನ ಮೋಹನ
ಕೇಳು ನಿನ್ನ ಎದೆಯ ಬಡಿತ
ಅಲ್ಲಿ ಕೇವಲ ನಾನೇ ನಿನ್ನ ಮಿಡಿತ!!



ನಿನ್ನ ತುಂಟ ನೋಟಕ್ಕೆ ನನ್ನ ಕಾಲಿನ ಗೆಜ್ಜೆ ನಾಚಿದೆ
ಕೊಳಲಿಗೇಕೆ ಮುನಿಸು?
ಬೆಳಕು ಬಂದ ಒಡನೆ ಅನಿಸುವುದು,ನಿನ್ನ
ಇರುವಿಕೆ ಒಂದು ಕನಸು!!



ದು:ಖದ ಕಡಲಿದೆ ಎದೆಯಲ್ಲಿ ಶ್ಯಾಮ ನೀನೊಂದು ದೋಣಿ
ನೀಡಿರುವೆ ನಿನಗೆ  ನನ್ನ ಇಹಪರದ ಗೇಣಿ!!!


chitra krupe- kallavida mR.Keshava raghavan

4 comments:

  1. ಶಹಬ್ಬಾಸ್ :) ಸೂಪರ್ ಶಮ್ಮಿ ಅಕ್ಕ .

    ReplyDelete
  2. ಮೋಹನನ ಮೋಹ ತೀರದು
    ನೀವು ಹೇಳಿದಂತೆ ಅದೊಂದು ದೈವಿಕ ದಾಹ.
    ಗರಿಕೆಯ ಮೇಲೂ ಅವನ ಹೆಸರು ಆಹಾ ಎಷ್ಟು ಚಂದ.
    ಬರೆಯುತ್ತಿರಿ

    ReplyDelete
  3. ನನ್ನ ಮನದ ತುಡಿತಕ್ಕೆ ನಿನ್ನ ನವಿಲುಗರಿ ಸಾಕು

    ಮೊದಲ ನೋಟಕ್ಕೆ ನಮ್ಮನೆಯಂಗಳದಿ ಹೂ ಬಳ್ಳಿ ಚಿಗುರಿದೆ
    ಇನ್ನು ನನ್ನ ಗತಿ ಏನಿರಬಹುದು??

    ನಿನ್ನ ತುಂಟ ನೋಟಕ್ಕೆ ನನ್ನ ಕಾಲಿನ ಗೆಜ್ಜೆ ನಾಚಿದೆ

    OMG these are reallllll awesome thoughts....
    Khudose.. to you.. Shakthi.

    ReplyDelete