Friday, September 6, 2013

ಕೇಳು ಶ್ಯಾಮ.....


ಕೇಳು ಶ್ಯಾಮ ,

ಯಮುನೆಯಲೆಯ ಉಬ್ಬರಕೆ ರಾತ್ರಿಯೇ ಬೇಕು,
ನನ್ನ ಮನದ ತುಡಿತಕ್ಕೆ ನಿನ್ನ ನವಿಲುಗರಿ ಸಾಕು ...


ನಿನ್ನ ಮೋಹಕ  ಮೊದಲ ನೋಟಕ್ಕೆ ನಮ್ಮನೆಯಂಗಳದಿ ಹೂ ಬಳ್ಳಿ ಚಿಗುರಿದೆ
ಇನ್ನು ನನ್ನ ಗತಿ ಏನಿರಬಹುದು??



ಸಖಿಯರೆಲ್ಲರೂ ಕೇಳುವರು ..
ಸತಿ ನೀನು, ಮೋಹನನ ಮೇಲೇಕೆ ಈ ಪರಿಯ ಮೋಹ
ನಾಬಲ್ಲೆ ಇದು  ತೀರದ ದೈವಿಕ ದಾಹ!!



ಗೋಕುಲದ ಗರಿಕೆಯೂ ನಿನ್ನ ಹೆಸರ ನುಡಿವುದೆಂದೇಕೆ
ಈ ಪರಿಯ ಹೆಮ್ಮೆ ನನ್ನ ಮೋಹನ
ಕೇಳು ನಿನ್ನ ಎದೆಯ ಬಡಿತ
ಅಲ್ಲಿ ಕೇವಲ ನಾನೇ ನಿನ್ನ ಮಿಡಿತ!!



ನಿನ್ನ ತುಂಟ ನೋಟಕ್ಕೆ ನನ್ನ ಕಾಲಿನ ಗೆಜ್ಜೆ ನಾಚಿದೆ
ಕೊಳಲಿಗೇಕೆ ಮುನಿಸು?
ಬೆಳಕು ಬಂದ ಒಡನೆ ಅನಿಸುವುದು,ನಿನ್ನ
ಇರುವಿಕೆ ಒಂದು ಕನಸು!!



ದು:ಖದ ಕಡಲಿದೆ ಎದೆಯಲ್ಲಿ ಶ್ಯಾಮ ನೀನೊಂದು ದೋಣಿ
ನೀಡಿರುವೆ ನಿನಗೆ  ನನ್ನ ಇಹಪರದ ಗೇಣಿ!!!


chitra krupe- kallavida mR.Keshava raghavan

Tuesday, September 3, 2013

ಅಮೃತ ವಾಹಿನಿ

ನಾ  ಕಪ್ಪು 

ನೀ ಬಿಳುಪು

ಆದರೂ ನಿನ್ನೊಲಮೆ 

ನನಗೆ ಒಪ್ಪು

ಕಾಲಕೋಶಗಳ ಮೀರಿತು 

ಸ್ನೇಹದ ಭಾಷೆ

ಕಡಿದ ಸಂಬಂಧಗಳ ಕೊಂಡಿ

ಕೂಡೀತು ಹೇಗೆ?

ಅವ  ಆ ಜಾತಿ

ಇವ ಈ  ಜಾತಿ

ಕದಡಿತು ಶಾಂತ

ಕೊಳದಂತ ಮತಿ

ತಿಳಿಯಾದೆದೆವೆಂದೂ

ಅಹಾರವಿರಲಿ ಬೇರೆ

ಇರದಿರಲಿ ಭಾವಗಳಿಗೆ

ಮುಖವಾಡದ  ಸಂಸ್ಕೃತಿ

ನನ್ನ ನರನಾಡಿಗಳಲ್ಲು ಹರಿಯುತಿದೆ

ಅದೇ ಕೆಂಪು ರಕ್ತ

ಅದೇವು ಎಂದು ನಾವು

ನಿಜದಿ ಮುಕ್ತ??

ಎಲ್ಲರೆದೆಯಲ್ಲೂ

ಪ್ರೀತಿ ಗುಪ್ತ ಗಾಮಿನಿ

ದೇಶ ಭಾಷೆಗಳ

ಮೀರಿದ ಅಮೃತ ವಾಹಿನಿ